ಸಯ್ಯಿದ್ ಹೈದರಲಿ ಶಿಹಾಬ್ ತಂಙಳ್
ಪ್ರವಾದಿ (ಸ) ರ ಪೌತ್ರ ಹಝ್ರತ್ ಹುಸೈನ್ (ರ) ಪರಂಪರೆಯಲ್ಲಿ ಜನಿಸಿದವರಾಗಿದ್ದಾರೆ ಸಯ್ಯಿದ್ ಹೈದರಲಿ ಶಿಹಾಬ್ ತಂಙಳ್. ಸಯ್ಯಿದ್ ಹುಸೈನ್ (ರ) ರವರ ಪರಂಪರೆಯಲ್ಲಿ ಪ್ರಶಸ್ತರಾಗಿದ್ದ ಯಮನಿನ ಹಳರ್ ಮೌತಿನಲ್ಲಿ ವಫಾತಾದ ಅಲೀ ಬಿನ್ ಅಬೀಬಕರ್ ಅಸ್ಸಕರಾನ್ (ರ) ಅವರ ಪರಂಪರೆಯ ಹತ್ತನೇ ತಲೆಮಾರಿಗೆ ಸೇರಿದ ಸಯ್ಯಿದ್ ಅಲಿ ಶಿಹಾಬುದ್ದೀನ್ (ರ) ರವರು ಹಿಜ್ರ 1181 ರಲ್ಲಿ ಕೇರಳಕ್ಕೆ ಆಗಮಿಸಿದರು. ಕಣ್ಣೂರು ಜಿಲ್ಲೆಯ ವಳಪಟ್ಟಣದಲ್ಲಾಗಿದೆ ಅವರ ಖಬರ್. ಇವರ ಪುತ್ರ ಸಯ್ಯಿದ್ ಹುಸೈನ್ ಎಂಬವರು ಮಲಪ್ಪುರಂಗೆ ಆಗಮಿಸಿ ಅಲ್ಲೇ ತಂಗಿದರು. ಇವರ ಪುತ್ರ ಸಯ್ಯಿದ್ ಹುಸೈನ್ ಆಟಕೋಯ ತಂಙಳ್ ರವರಾಗಿದೆ ಪಾಣಕ್ಕಾಡಿಗೆ ವಾಸ ಬದಲಿಸಿದ್ದು. ಧಾರ್ಮಿಕ ವಿದ್ವಾಂಸರಾಗಿದ್ದ ಇವರು ಬ್ರಿಟೀಷ್ ವಿರುದ್ಧ ಹೋರಾಟಗಳನ್ನು ಬೆಂಬಲಿಸಿದ ಕಾರಣದಿಂದ 1862 ರಲ್ಲಿ ಬ್ರಿಟೀಷ್ ಅಧಿಕಾರಿಗಳು ವೆಲ್ಲೂರಿಗೆ ಗಡಿಪಾರು ಮಾಡಿದರು. ಇವರ ಪುತ್ರರಾದ ಸಯ್ಯಿದ್ ಮುಹಮ್ಮದ್ ಕುಞ್ಞಿಕ್ಕೋಯ ತಂಙಳ್ ರವರ ಪುತ್ರ ಪುದಿಯ ಮಾಳಿಯೇಕ್ಕಲ್ ಸಯ್ಯಿದ್ ಅಹ್ಮದ್ (ಪಿ.ಎಂ.ಎಸ್.ಎ) ಪೂಕೋಯ ತಂಙಳ್ ಹಾಗೂ ಸಯ್ಯಿದ್ ಹಾಮಿದ್ ಕುಞ್ಞಿ ಸೀದಿಕ್ಕೋಯ ತಂಙಳ್ ರವರ ಪುತ್ರಿ ಸಯ್ಯಿದ ಆಯಿಶ ಚೆರುಕುಞ್ಞಿ ಬೀವಿಯವರ ಮೂರನೆಯ ಮಗನಾಗಿ 1947 ಜೂನ್ 15 ಕ್ಕಾಗಿದೆ ಹೈದರಲಿ ಶಾಬ್ ತಂಙಳ್ ಜನಿಸಿದ್ದು. ಎಳೆಯ ಪ್ರಾಯದಲ್ಲೇ ತಾಯಿ ವಫಾತಾದ್ದರಿಂದ ಪಿತೃ ಸಹೋದರಿ ಮುತ್ತು ಬೀವಿಯ ಸಂರಕ್ಷಣೆಯಲ್ಲಾಗಿತ್ತು ಸಯ್ಯಿದ್ ಹೈದರ